ನಾವು ಚಿಕ್ಕಂದಿನಿಂದ ಇಂದಿನ ವರೆಗೆ ಕನಸು ಕಾಣುತ್ತಲೆ ಬಂದಿದ್ದವಿ , ಆ ಕನಸುಗಳು ಸಾಕಾರವಾಗದಿದ್ದಾಗ ಹಿಂದೆ ನಿರಾಶೆಗೊಂಡಿರುವೆವು, ನಮ್ಮ ಆಸೆ ಕನಸುಗಳೆಲ್ಲ ಕೊಚ್ಚಿ ಹೋದ ನಂತರ ನಾವು ಹೆಚ್ಚು ಕಲಿತುಕೊಳ್ಳುತ್ತಾ, ಜೀವನದಲ್ಲಿ ಎಲ್ಲದರ ಮೇಲೆಯೂ ಪೂರ್ವಾಗ್ರಹ ಗಳನ್ನು ಕಟ್ಟಿಕೊಂಡು ಸಮಾಧಾನ ಪಟ್ಟುಕೊಳ್ಳಲು ಮಾರ್ಗ ಕಂಡುಕೊಳ್ಳುವೆವು. ಈ ಪೂರ್ವಾಗ್ರಹದ ಬಗ್ಗೆ ಉದಾಹರಣೆ ಕೊಡುವುದಾದರೆ (1) ನಾವು ಈ ಹಿಂದೆ ಒಬ್ಬರನ್ನು ಅತಿಯಾಗಿ ಹೆಚ್ಚಿಕೊಂಡು, ಅವರೊಡನೆ ಮನಸ್ತಾಪ ಮಾಡಿಕೊಂಡು ಬಹು ನೋವಿನಿಂದ ಅವರನ್ನು ಕಳೆದುಕೊಂಡ ನಂತರದ ದಿನಗಳಲ್ಲಿ ಯಾರನ್ನು ಅತಿಯಾಗಿ ಹೆಚ್ಚಿಕೊಳ್ಳಬಾರದು, ಹಚ್ಚಿಕೊಂಡರೆ ನೋವೆ ಶಾಶ್ವತವೆಂದು ಯಾರನ್ನು ಮಾತಾಡಿಸದೆ , ಪ್ರೀತಿ ಸದೆ ನಮಗೆ ನಾವೇ ಗೋಡೆ ಕಟ್ಟಿಕೊಳ್ಳುತ್ತೆವೆ. ಹಿಂದೆ ನಮಗೆ ಯಾರೋ ಒಬ್ಬ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದ್ದರೆ ಈಗ ಯಾರನ್ನು ನಂಬದಿರುವುದು ಅಥವಾ ಅವರ ಜೊತೆ ಪ್ರೀತಿ ಆಧರರಿಂದ ನಡೆದುಕೊಳ್ಳದೆ ನಾಟಕೀಯ ಸ್ನೆಹ ತೊರಿಸುವುದು . ಇವೆಲ್ಲ ನಮ್ಮ ಪೂರ್ವಾಗ್ರಹದ ಪರಿಣಾಮಗಳು .ಹಾಗಾದರೆ ನಮ್ಮ ಬದಕು ಹೇಗಿರಬೇಕು. ಚಿಂತನೆ ಹೇಗಿರಬೇಕು? ನೋಡೋಣ.. (1)ನಾವು ಜೀವನವನ್ನ ಒಂದು ದಿನಕ್ಕಾಗಿ ಬಾಳ ಬೇಕು .ನಮಗೆ ಪ್ರೀತಿ ಸು ವವರು ಸಿಕ್ಕಾಗ ಮನಸ್ಫೂರ್ತಿಯಾಗಿ ಪ್ರೀತಿಸಬೇಕು, ಅವರನ್ನ ಕಳೆದುಕೊಳ್ಳುವ ಬಯವಾಗಲಿ ಅಥವಾ ನಿರೀಕ್ಷೆಗಳ ಭಾರ ಬರಬಾರದು.ನಿತ್ಯ ಜೀವನದಲ್ಲಿ ನಾಳೆಗಾಗಿ ನಿರೀಕ್ಷೆ, ಆಸೆ, ಕನಸು ಇಟ್ಟುಕ...